March 14, 2025

ಊಟ ಬಡಿಸದ ಕಾರಣ ಟವೆಲ್ ನಿಂದ ಬಿಗಿದು ಪತ್ನಿಯ ಕೊಲೆ….

Spread the love

ಶಿವಮೊಗ್ಗ :

ಶಿಕಾರಿಪುರ ತಾಲೂಕಿನ ಅಂಬ್ಲಿಗೋಳದಲ್ಲಿ ಪತ್ನಿಯನ್ನ ಟವೆಲ್ ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ಗೌರಮ್ಮ (28) ಕುತ್ತಿಗೆಗೆ ಟವೆಲ್ ಸುತ್ತಿ ಕೊಲೆ ಮಾಡಿದ ಆರೋಪದ ಮೇರೆಗೆ ಪತಿ ಮನು (32) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೌಟುಂಬಿಕ ಕಲಹ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮೃತ ಗೌರಮ್ಮ ಶಿಕಾರಿಪುರದ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ದಿನ, ಮನೆಗೆ ಬಂದ ಮನು ಊಟ ಬಡಿಸಲು ಗೌರಮ್ಮಗೆ ಹೇಳಿದ್ದಾನೆ. ಆಗ ಗೌರಮ್ಮ ಫೋನ್‌ನಲ್ಲಿ ಮಾತನಾಡುತ್ತಾ ಇದ್ದಾಗ, ಸ್ವತಃ ಊಟ ಬಡಿಸಿಕೊಳ್ಳಲು ಸೂಚಿಸಿದ್ದಾಳೆ. ಇದರಿಂದ ಪ್ರಾರಂಭವಾದ ಜಗಳವು ತೀವ್ರಗೊಂಡು ಮನು ಗೌರಮ್ಮನನ್ನು ಟವೆಲ್ ಬಳಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೌರಮ್ಮ ರ ತಂದೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.