
ತಿರುಮಲದಲ್ಲಿ ಶ್ರೀವಾರಿ ದರ್ಶನಕ್ಕಾಗಿ ಬಂದಿದ್ದ ಭಕ್ತರಿಗೆ ಬುದುವಾರ ರಾತ್ರಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ದೇವಸ್ಥಾನದ ಮುಂಭಾಗದಲ್ಲಿ ಹಲವರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಇದಕ್ಕೆ ಕಾರಣವಾಗಿ ಬೆಟ್ಟದಲ್ಲಿ ಸುರಿದ ಧಾರಾಕಾರ ಮಳೆ. ಸುಮಾರು 10 ಗಂಟೆಯಿಂದ ಒಂದೂವರೆ ಗಂಟೆಗಳ ಕಾಲ ಮಳೆಯು ನಿರಂತರವಾಗಿ ಸುರಿದ ಪರಿಣಾಮ, ದೇವಾಲಯದ ಮುಂದೆ ಇರುವ ಚರಂಡಿಗಳು ತುಂಬಿ ಹರಿಯತೊಡಗಿದವು.

ಮಳೆಯೊಂದಿಗೆ, ಲಡ್ಡು ಬೂಂದಿ ತಯಾರಿಕಾ ಘಟಕದಿಂದ ಹೊರಬಂದ ತುಪ್ಪ ತುಂಬಿದ ಕೊಳಚೆ ನೀರು ಚರಂಡಿಗಳಲ್ಲಿ ಉಕ್ಕಿ ಹರಿಯುತ್ತಿದ್ದು, ಕೆಲವು ಸ್ಥಳಗಳಲ್ಲಿ ಪುಷ್ಕರಿಣಿ ಮಾರ್ಗದಿಂದ ಹರಿಯತೊಡಗಿದೆ. ಈ ಕೊಳಚೆ ನೀರಿನೊಂದಿಗೆ ಸೇರಿದ ತುಪ್ಪವು ಭಕ್ತರಿಗೆ ಭಾರೀ ಸಮಸ್ಯೆ ಉಂಟುಮಾಡಿತು.

ಶ್ರೀವಾರಿಯ ದರ್ಶನ ಮುಗಿಸಿ ಲಡ್ಡು ಪ್ರಸಾದವನ್ನು ತರುತ್ತಿದ್ದ 11 ಮಂದಿ ಭಕ್ತರು ಈ ಕೊಳಚೆ ನೀರಿಗೆ ಕಾಲಿಟ್ಟು ಜಾರಿ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣವೇ ವಿಷಯ ತಿಳಿದು, ಭದ್ರತಾ ಸಿಬ್ಬಂದಿಗಳು ಮಳೆಯು ಕಡಿಮೆಯಾಗುವವರೆಗೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಗೆ ಹಗ್ಗಗಳನ್ನು ಹಾಕಿದರು

.
ಈ ಘಟನೆಯು ತಿರುಮಲದ ಶ್ರೀವಾರಿ ದರ್ಶನಕ್ಕೆ ಬಂದ ಭಕ್ತರಲ್ಲಿ ಆತಂಕವನ್ನು ಉಂಟುಮಾಡಿದ್ದು, ಮಳೆಯಿಂದ ಉಂಟಾಗಿರುವ ಸ್ಥಿತಿಗೆ ತಕ್ಷಣವೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.
