March 14, 2025

ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಇನ್ನೆಲೆ ಪತ್ರಕರ್ತ ಬಂಧನ…!?

Spread the love

ತುಮಕೂರು: ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿ, ಅವರ ಚಿತ್ರವನ್ನು ಅಶ್ಲೀಲವಾಗಿ ತಿರುಚಿ ಪ್ರಸಾರ ಮಾಡಿದ ಆರೋಪದ ಮೇಲೆ ಪತ್ರಕರ್ತ ಜಿ.ಆರ್. ಸುಧೀಂದ್ರ ಎಂಬುವರನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಮಹಿಳಾ ಅಧಿಕಾರಿ ತಮ್ಮ ದೂರು ಪತ್ರದಲ್ಲಿ, ‘ನನ್ನ ಫೋಟೋಗಳನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಇರುವಂತೆ ಅಶ್ಲೀಲವಾಗಿ ತಿರುಚಿ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಸ್ಟೇಟಸ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಮರ್ಯಾದೆ ಮೀರಿದ್ದಾರೆ.

ಸಹಕಾರ ನೀಡದಿದ್ದರೆ ಕೈಕಾಲು ಮುರಿಯುತ್ತೇನೆ, ಜೀವ ತೆಗೆಯುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ. ಈ ದೂರು ಆಧರಿಸಿ, ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಲ್ಲದೆ, ಮಹಿಳಾ ಅಧಿಕಾರಿಯ ಸಹೋದರನಿಗೂ ಸುಧೀಂದ್ರ ಬೆದರಿಕೆ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ‘₹20 ಲಕ್ಷ ಕೊಡಿಸಿದರೆ ಆಕೆಯ ತಂಟೆಗೆ ಹೋಗುವುದಿಲ್ಲ.

ಪ್ರತಿ ತಿಂಗಳು ಮಾಮೂಲು ತಲುಪಬೇಕು. ಇಲ್ಲದಿದ್ದರೆ ಕೆಲವು ಕಾರ್ಮಿಕರು ಮತ್ತು ಕಾರ್ಖಾನೆಯ ಮಾಲೀಕರನ್ನು ಎತ್ತಿ ಕಟ್ಟುತ್ತೇನೆ, ಜೀವಂತವಾಗಿ ಇಲ್ಲದಂತೆ ಮಾಡುತ್ತೇನೆ’ ಎಂದು ಹೆದರಿಸಿದ್ದರು’ ಎಂದು ದೂರಿನಲ್ಲಿ ಹೇಳಲಾಗಿದೆ.

‘ನನಗೆ ಸಹಕಾರ ನೀಡದಿದ್ದರೆ ಜಿಲ್ಲೆಯಲ್ಲಿ ಬಿಡುವುದಿಲ್ಲ. ಕೆಲಸ ಮಾಡಲು ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಮಹಿಳಾ ಅಧಿಕಾರಿಯ ದೂರು ವಿವರಿಸುತ್ತಿದೆ.

ಈ ಪ್ರಕರಣವನ್ನು ಐಪಿಸಿ 506 (ಬೆದರಿಕೆ), 509 (ಮಹಿಳೆಗೆ ಅವಮಾನ), 504 (ಶಾಂತಿಭಂಗ) ಸೇರಿದಂತೆ ಇತರೆ ಕಲಂ ಅಡಿಯಲ್ಲಿ ದಾಖಲಿಸಲಾಗಿದೆ.

ಈ ಪ್ರಕರಣವು ಪತ್ರಕರ್ತರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಮಹಿಳಾ ಅಧಿಕಾರಿಗಳಿಗೆ ಅನ್ಯಾಯ ಮಾಡುವ ಅಪಾಯವನ್ನು ಎತ್ತಿ ತೋರಿಸುತ್ತದೆ.

ಇಂತಹ ಘಟನೆಗಳು ಮಹಿಳೆಯರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವಲ್ಲಿ ಪೊಲೀಸರ ಮತ್ತು ನ್ಯಾಯಾಂಗದ ಪಾತ್ರವಾಗಿರುತ್ತದೆ..