March 14, 2025

ಹೊಗೆ ನಿಯಂತ್ರಿಸಿ ಪರಿಸರ ರಕ್ಷಿಸಿ ನಾಗರಿಕರ ಆರೋಗ್ಯ ರಕ್ಷಣೆಗೆ ಮಾಡುವಂತೆ ಜನರ ಅಳಲು….

Spread the love

ಪಟ್ಟಣದ ಮೂಲಕ ಹಾದು ಹೋಗುವ ಕೆಲ ಸಾರಿಗೆ ಸಂಸ್ಥೆ ಬಸ್ಸುಗಳು ವ್ಯಾಪಕವಾಗಿ ಕಪ್ಪು ಹೊಗೆ ಹೊರಸೂಸುತ್ತಿವೆ. ಈ ಹೊಗೆ ಮಾಲಿನ್ಯವು ಪರಿಸರವನ್ನು ಕಲುಷಿತಗೊಳಿಸುತ್ತಿದೆ ಮತ್ತು ನಾಗರಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿದೆ.

ಸಂಬಂಧಪಟ್ಟ ಇಲಾಖಾಧಿಕಾರಿಗಳು ವಾಹನಗಳ ಸುಸ್ಥಿತಿಗೆ ಕ್ರಮ ಕೈಗೊಂಡು, ಹೊಗೆ ನಿಯಂತ್ರಿಸಿ ಪರಿಸರ ಸಂರಕ್ಷಣೆಗೆ ಮತ್ತು ನಾಗರಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಉಡುಪಿ, ಮಂಗಳೂರು, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ತುರುವೇಕೆರೆ ಸೇರಿದಂತೆ ಹಲವು ಘಟಕಗಳ ಸಾರಿಗೆ ಸಂಸ್ಥೆಯ ಬಸ್ಸುಗಳು ಪಟ್ಟಣದ ಮೂಲಕ ಸಂಚರಿಸುತ್ತಿವೆ.

ಈ ಬಸ್ಸುಗಳು ನಿರಂತರವಾಗಿ ಕಪ್ಪು ಹೊಗೆ ಬಿಡುತ್ತಿರುವುದು ನಗರವಾಹನಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ, ಬಸ್‌ಗಳ ಮಾಲೀಕರು ಮತ್ತು ಸಾರಿಗೆ ಇಲಾಖೆ ಇದರ ಬಗ್ಗೆ ತಕ್ಷಣ